ಶಸ್ತ್ರ ಚಿಕಿತ್ಸೆಕ್ಕೆ ಒಳಗಾಗಿದ್ದ ವ್ಯಕ್ತಿಗೆ ಧನ ಸಹಾಯ. ಬಿ.ವೆಂಕಟೇಶ್
ಹನೂರು :ತಾಲೋಕಿನ ರಾಮಾಪುರ ಹೋಬಳಿಯ
ಪಡಸಲನತ್ತ ಗ್ರಾಮದ ಲಿಂಗರಾಜು ಎಂಬ ವ್ಯಕ್ತಿಯು ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಹಿನ್ನಲೆ ಅವರ ಮನೆಗೆ ಜನಾಶ್ರಯ ಟ್ರಸ್ಟ್ ಅಧ್ಯಕ್ಷರು ಹಾಗೂ ಹನೂರು ಬಿಜೆಪಿ ಮುಖಂಡರಾದ ಬಿ. ವೆಂಕಟೇಶ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ. ವೆಂಕಟೇಶ್ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ವಿರುವ ಜನರಿಗೆ ಟ್ರಸ್ಟ್ ನೆರೆವಾಗುತ್ತಿದ್ದು, ಬಡವರ, ನೊಂದವರ, ದ್ವನಿಯಾಗಿ ಅವರಿಗೆ ಆಸರೆ ಯಾಗಿ ಸಮಾಜದಲ್ಲಿ ಸಹಬಾಳ್ವೆಗೆ ಜೊತೆಯಾಗಿ ಅವರು ಸಹ ನಿಲ್ಲುವಂತಾಗಬೇಕು ಇದು ನಮ್ಮ ಟ್ರಸ್ಟ್ ನ
ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಇನ್ನಿತರು ಉಪಸ್ಥಿತರಿದ್ದರು.



Post Comment