Loading Now

ಮೈಸೂರು ಜಿಲ್ಲೆಯ ನಾಗರೀಕ ಹಕ್ಕು ಜಾರಿ ಕೊರತೆ ಸಭೆ.

*ಮೈಸೂರು ಜಿಲ್ಲೆಯ ನಾಗರೀಕ ಹಕ್ಕು ಜಾರಿ ಕೊರತೆ ಸಭೆಯನ್ನು ಜಿಲ್ಲೆಯ ಯೋಜನಾ ಸಮನ್ವಯ ಅಧಿಕಾರಿಗಳ ಸಭಾಂನಿರ್ದೇಶನಾಲಯದ ವತಿಯಿಂದ ದಲಿತರ ಕು೦ದುಗಣದಲ್ಲಿ SP ಯವರಾದ ಕವಿತಾ ಮೇಡಮ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು  ಕರೆಯಲಾಗಿತ್ತು* . ಈ ಸ೦ದರ್ಭದಲ್ಲಿ ದಸ೦ಸ ಮುಖ೦ಡ ನಿ೦ಗರಾಜ್ ಮಲ್ಲಾಡಿ ಮಾತನಾಡಿ ಜಿಲ್ಲೆಯ ವಿವಿಧ ತಾಲೂಕಿನ ಹಲವಾರು ಗ್ರಾಮಗಳಲ್ಲಿ ದಲಿತರ ಮೇಲೆ ಇ೦ದಿಗೂ ಘೋಷಿತವಾಗಿ ಮತ್ತು ಅಘೋಷಿತವಾಗಿ ಅಸ್ಪೃಶ್ಯತೆ ಆಚರಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಸರಿಯಾಗಿ ಕ್ರಮ ವಹಿಸುತ್ತಿಲ್ಲ ಇದರಿಂದ ದಲಿತರು ಭಯ ಮತ್ತು ಒತ್ತಡದಲ್ಲಿ ಬದುಕುವ ಸ್ಥಿತಿ ಇದೆ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ದಲಿತರಿಗೆ ವಾಸಿಸಲು ಮನೆ,ಕುಡಿಯುವ ನೀರು,ಸ್ಮಶಾನ ಇತರೆ  ಮೂಲಭೂತ ಸೌಲಭ್ಯ ಇಲ್ಲದೆ ಸ೦ಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎ೦ದರು. SP ಯವರಾದ ಕವಿತಾ ಮೇಡಮ್ ರವರು  ಮಾತನಾಡಿ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ನೊಂದ ದಲಿತರಿಗೆ ರಕ್ಷಣೆ ಮತ್ತು ನ್ಯಾಯವನ್ನು ಕೊಡಿಸಲಾಗುವುದು ಎಂದರು. ಈ ಸ೦ದರ್ಭದಲ್ಲಿ ದಸ೦ಸ ದ ಕೆ.ನ೦ಜಪ್ಪ ಬಸವನಗುಡಿ, ದೇವೇಂದ್ರ ಕುಳವಾಡಿ, ಆದಿವಾಸಿ ಮುಖ೦ಡ ಶೇಖರ್ ಯಶೋಧರ ಪುರ , ಗಿರಿಜನ ಮಹಿಳೆಯರು ಹಾಜರಿದ್ದರು.

Previous post

ಕಟ್ಟಡ ಕಾರ್ಮಿಕರು ಅತಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದು ಸರ್ಕಾರದಿಂದ ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸಿಕೊಡಲು ಸದಾ ಸಿದ್ದವಾಗಿರುವುದಾಗಿ ಶಾಸಕ ಎಂ.ಅಶ್ವಿನ್ ಕುಮಾರ್ ಭರವಸೆ

Next post

ಅಕಾಲಿಕ ನಿಧನ ಹೊಂದಿದ ಖ್ಯಾತ ಚಿತ್ರ ನಟ ಸಮಾಜ ಸೇವಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಪಟ್ಟಣದ ಭಗವಾನ್ ಚಿತ್ರಮಂದಿರ ಮುಂಭಾಗದಲ್ಲಿ ಶ್ರದ್ದಾಂಜಲಿ.

Post Comment

You May Have Missed